You can order Krodhi Nama Samvatsara (2024-2025) Panchanga from here

Articles/ ಸರ್ವಮೂಲದರ್ಶಿನೀ-೮

last year

ಶ್ರೀಗುರುಭ್ಯೋ ನಮಃ

ದ್ವಾದಶಸ್ತೋತ್ರದ ಹಿನ್ನಲೆ

ದ್ವಾದಶಸ್ತೋತ್ರದ ಹಿನ್ನೆಲೆಯನ್ನು ಪಲಿಮಾರುಮಠ-ದ ಶ್ರೀರಘುವರ್ಯತೀರ್ಥರು
ತಮ್ಮ ಗ್ರಂಥದಲ್ಲಿ ‘ಪ್ರಾಚೀನಾಚಾರ್ಯರು ಹೇಳುತ್ತಿದ್ದ ಚರಿತ್ರೆ’ ಎಂದು ಹೇಳಿ, ಈ ಕಥೆಯನ್ನು ಹೇಳಿದ್ದಾರೆ
“ಶ್ರೀಮದಾಚಾ-ರ್ಯರು ದ್ವಾರಕೆಯಿಂದ ಬಂದ ಕೃಷ್ಣಪರಮಾತ್ಮನ ವಿಗ್ರಹವನ್ನು ತರುವ
ಸಂದರ್ಭದಲ್ಲಿ ದ್ವಾದಶಸ್ತ್ರೋತ್ರ-ಗಳನ್ನು ರಚಿಸಿದರು” ಎಂದು ಶ್ರೀವಿಶ್ವಪತಿತೀರ್ಥರು ಪ್ರಾಚೀನರಿಗೆ
ಸಮ್ಮತವಾದ ಇದೇ ಚರಿತ್ರೆಯನ್ನು ಹೇಳುತ್ತಾ ಸೂಕ್ಷ್ಮವಿಷಯ-ವೊಂದನ್ನು ಹೇಳಿದ್ದಾರೆ.

“ಆಚಾರ್ಯರು ಉಡುಪಿ-ಯಿಂದ ಪಶ್ಚಿಮಸಮುದ್ರಕ್ಕೆ(ಅಂದರೆ ಮಲ್ಪೆಗೆ) ಕೃಷ್ಣನ ವಿಗ್ರಹವನ್ನು ತರಲು
ಹೋಗುವಾಗ ‘ವಂದೇ ವಂದ್ಯಂ..’ ಎಂದು ಆರಂಭಿಸಿ 5 ಸ್ತೋತ್ರಗಳನ್ನು ರಚಿಸಿರುತ್ತಾರೆ.
ಸಮುದ್ರತೀರದಲ್ಲಿ ಕೃಷ್ಣನ ವಿಗ್ರಹವು ಸಿಕ್ಕಾಗ ‘ದೇವಕಿನಂದನ ನಂದಕುಮಾರ ಎಂದಾ-ರಂಭಿಸಿ
ಆನಂದಸುಪೂರ್ಣ’ ಎಂಬಲ್ಲಿಯವರೆಗಿನ ಎರಡುವರೆ ಶ್ಲೋಕಗಳಿಂದ ಕೃಷ್ಣದೇವರನ್ನು ಸ್ತುತಿಸುತ್ತಾರೆ” ಎಂದು.
ಸಾಂಪ್ರದಾಯಿಕವಾಗಿಯೂ ಇದೇ ಚರಿತ್ರೆಯನ್ನೇ ಎಲ್ಲರೂ ಹೇಳುತ್ತಾರೆ. ಹಾಗಾಗಿ ಈ ವಿಷಯದಲ್ಲಿ
ಯಾವುದೇ ವಿವಾದಕ್ಕೆ ಅವಕಾಶವಿಲ್ಲ.

ಈ ವಿಷಯಗಳಿಗೆ ಆಧಾರ

೧) अत्रैवं पूर्वाचार्यप्रवादः .... ‘तत्र मग्नां
समादाय प्रतिमां द्वादश स्तुतीः। कुर्वंन्नानीय
तां रूप्य आस्थापयदनल्पधीः’ ।
(ಹೃಷೀಕೇಶತೀರ್ಥರ ಪರಂಪರೆಯಲ್ಲಿ ಬಂದ, ಹೃಷೀಕೇಶತೀರ್ಥರದ್ದು ಎಂದು ಪ್ರಸಿದ್ಧವಾದ
ತಾಡವಾಲೆಯನ್ನು ನೋಡಿದ, ಪಲಿಮಾರುಮಠದ ರಘುವರ್ಯತೀರ್ಥರ ಅಣುಮಧ್ವ-ವಿಜಯವ್ಯಾಖ್ಯಾನಸೌರಭಪ್ರಕಾಶಿಕಾ)

೨) (देवकिनन्दन इत्यादि) “एनां कार्ष्णीं कथां
पठतैवाचार्येण रूप्यपीठपुराधिवासः श्रीकृष्णः
समुद्रजठरादानीतः” इत्याभणकमा-भणन्ति
सम्प्रदायविदः। अत एव अस्मिन् स्तोत्रे

‘देवकिनन्दननन्दकुमार’ इत्यारभ्य ‘आनन्द-सुपूर्ण’ इत्यन्तं प्रथमत एव मूलकोशेषु पठ्यते।
तत्र च इत्थमाभणकं वर्णयन्ति ‘रूप्यपीठ-पुरात् श्रीकृष्णानयनार्थं पश्चिमसमुद्रं प्रति
गमनसमये वन्दे वन्द्यम् इत्यादिना भगवन्तं स्तुवन्नेव गतः श्रीमदानन्दतीर्थमुनिः
समुद्रतीरं गतः सन् द्वारकातः समागतं श्रीकृष्णं दृष्ट्वा समनन्तरमेव
‘देवकिनन्दननन्दकुमार इत्या-दिना आनन्दसुपूर्ण इत्यन्तेन’ श्रीकृष्णं स्तुत्वा
अनन्तरञ्च मत्स्यकरूपेत्यादिना दशावतारा-त्मकतया च तमेव स्तुतवान्’ इति। अत एव
‘राघव राघव’ ‘पाण्डवबन्धो’ ‘दैत्यविमोहक’ इत्यादिरूपेण दशावतार क्रमेण कृष्णस्तुतिः
पृथक् च मूलग्रन्थेषु पठ्यते।
(ಪೇಜಾವರಮಠದ ವಿಶ್ವಪತಿತೀರ್ಥರ ದ್ವಾದಶಸ್ತೋತ್ರವ್ಯಾಖ್ಯಾನ)

೩) ಪಾಠ-ಪ್ರವಚನಪರಂಪರೆಯಿಂದಲೂ ಇದೇ ವಿಷಯವು ಸಿದ್ಧವಾಗುತ್ತದೆ.
ಸರ್ವಾಭಿಮತಸ್ಯ ಪ್ರಮಾಣಂ ವಿನಾ ನಿಷೇದ್ಧುಮಶಕ್ಯತ್ವಾತ್.

ದ್ವಾದಶಸ್ತೋತ್ರದ ವಿನಿಯೋಗ ಮತ್ತು ಸಾಮರ್ಥ್ಯ

‘ಟೀಕಾಕೃತ್ಪಾದರು ವೃಷಭರೂಪದಲ್ಲಿ ಆಚಾರ್ಯರ ಬಳಿ ಇದ್ದಾಗ ಉಂಟಾದ ವಿಷದ
ಬಾಧೆಯನ್ನು ಪರಿಹರಿಸಲು ಆಚಾರ್ಯರು ಇದೇ ದ್ವಾದಶ-ಸ್ತೋತ್ರವನ್ನು ಉಪಯೋಗಿಸಿಕೊಂಡರು’
ಎಂದು ಚರಿತ್ರೆಯಲ್ಲಿ ಕೇಳುತ್ತೇವೆ.
..प्रवचनसमये द्वादशस्तोत्रपाठम्। दृष्ट्वा..
(ಅಣುಜಯತೀರ್ಥವಿಜಯ)
यतिराट् ‘द्व्यधिकां दशस्तुतिं’ पुरतोऽन्तेवसतां..। ....स्तोत्रद्वादशकं..
(ಬೃಹಜ್ಜಯತೀರ್ಥವಿಜಯ)

(ಇದು ಟೀಕಾಕೃತ್ಪಾದರ ಸಾಕ್ಷಾಚ್ಛಿಷ್ಯರಾದ, ಮಠಾ-ತೀತರಾಗಿ ಸಕಲಮಾಧ್ವಜ್ಞಾನಿಗಳಿಂದ ಪೂಜ್ಯರಾದ
ವ್ಯಾಸತೀರ್ಥರು ರಚಿಸಿದ ಜಯತೀರ್ಥವಿಜಯಲ್ಲಿದೆ.)
ಆದ್ದರಿಂದಲೇ ಸಕಲಮಾಧ್ವಸಂಪ್ರದಾಯಗಳಲ್ಲಿ ದ್ವಾದಶಸ್ತೋತ್ರವನ್ನು ನೈವೇದ್ಯಕಾಲದಲ್ಲಿ ಪಠಿಸುವ ಪದ್ಧತಿ ಬಂದಿದೆ.
ಈ ಚರಿತ್ರೆಯನ್ನು ಒಪ್ಪದಿದ್ದರೆ ನೈವೇದ್ಯಕಾಲದಲ್ಲಿ ದ್ವಾದಶಸ್ತೋತ್ರವನ್ನು ಪಠಿಸುವ
ಪದ್ಧತಿಗೆ ಪ್ರಮಾಣವೂ ಇಲ್ಲ, ಪ್ರಯೋಜನವೂ ಇಲ್ಲವಾದ್ದರಿಂದ ಅರ್ಥವೇ ಇಲ್ಲ ಎಂದಾಗುತ್ತದೆ.
ಈ ವಿಷಪರಿಹಾರಕತ್ವವು ಸ್ತೋತ್ರದ ಕ್ರಮದಿಂದಲೇ ಸೂಚಿತವಾಗುತ್ತದೆ.
ಅಮೃತಬೀಜವಾದ ವಂ ಎಂಬ ಅಕ್ಷರದಿಂದ ಆರಂಭವಾಗುವ ಗ್ರಂಥವು ದ ಎಂಬ ಅಕ್ಷರದಿಂದ
ಸಮಾಪ್ತವಾಗುತ್ತದೆ.
ವಂದೇ ವಂದ್ಯಂ..ಪರಾನಂದವರದ. ಎರಡನ್ನು ಸೇರಿಸಿದರೆ (ವಂ
ದದಾತಿ ಇತಿ) ವಂದ ಎಂದಾಗುತ್ತದೆ. ಗೀತೆಯ ಧರ್ಮ ಇದ್ದಂತೆ. (ಗಮನಿಸಿ ಬೇರೆ ಯಾವುದೇ
ಸ್ತೋತ್ರಗಳ ಆದ್ಯಂತ ಅಕ್ಷರಗಳನ್ನು ಯಾವುದೇ ಕ್ರಮದಲ್ಲಿ ಸೇರಿಸಿದರೂ ಈ ವಿಶೇಷವು
ಸಿಗುವುದಿಲ್ಲ.)

ಅಮೃತಬೀಜಪ್ರತಿಪಾದ್ಯನಾಗಿ ವಿಷವನ್ನು ಪರಿಹರಿಸಿ ಅಮೃತವನ್ನು, ಮೋಕ್ಷವನ್ನು ಕೊಡುವ ರೂಪ ವಾಸುದೇವರೂಪ.
ವಿಶೇಷವಾಗಿ ವಾಸುದೇವ-ರೂಪವನ್ನು ಈ ಗ್ರಂಥದಲ್ಲಿ ಆಚಾರ್ಯರು ಶ್ರುತಿ-ಲಿಂಗಗಳಿಂದ ಸ್ತುತಿಸಿದ್ದಾರೆ.
ವಾಸುದೇವಂ ನಿರಂಜನಂ, ವಾಸುದೇವಾಯ ತೇ ನಮ:,
ವಾಸುದೇವ ಅಪರಿಮೇಯ,
ಪ್ರೀಣಯಾಮೋ ವಾಸುದೇವಂ,
ಆನಂದಸ್ಯ ಪದಂ,
ಆನಂದತೀರ್ಥಪರಾನಂದವರದ.

ಇಲ್ಲಿ ವಾಸುದೇವ ಎಂದರೆ ಮೋಕ್ಷಪ್ರದಾವಾದ ವಾಸುದೇವರೂಪವೂ ಆಗುತ್ತದೆ.
ವಸುದೇವನ ಮಗನಾಗಿ ಅವತರಿಸಿದ ಕೃಷ್ಣರೂಪವೂ ಆಗುತ್ತದೆ.
ಸಂಖ್ಯೆಯಿಂದಲೂ ಗಮನಿಸಿ:- ವಾಸುದೇವನ ಮಂತ್ರ ಹನ್ನೆರಡು ಅಕ್ಷರದ್ದು. ವಾಸುದೇವನ ಸ್ತೋತ್ರ ಹನ್ನೆರಡು ಅಧ್ಯಾಯಗಳದ್ದು.
ಒಂದು ವಾಸುದೇವದ್ವಾದಶಾಕ್ಷರಮಂತ್ರ. ಮತ್ತೊಂದು ವಾಸುದೇವದ್ವಾದಶಸ್ತೋತ್ರ.
ದ್ವಾದಶಾಕ್ಷರಮಂತ್ರದ ವ್ಯಾಖ್ಯಾನರೂಪದಲ್ಲಿ ಈ ದ್ವಾದಶಸ್ತೋತ್ರವು ಇದ್ದಂತೆ ಇದೆ.
ವಾಸುದೇವರೂಪವನ್ನು ಪುನಃಪುನ: ಸ್ತುತಿಸುವ ಪ್ರೀಣಯಾಮೋ ವಾಸುದೇವಂ ಎಂಬ ಸ್ತೋತ್ರ-
ದಲ್ಲಿಯೂ ೧೨ ಶ್ಲೋಕಗಳನ್ನೇ ಆಚಾರ್ಯರು ಬಳಸುತ್ತಾರೆ. ಹಾಗಾಗಿ ಇಲ್ಲಿ ದ್ವಾದಶ ಸಂಖ್ಯೆಗೆ ಮಹತ್ವವಿದೆ.

ಈ ಗ್ರಂಥಕ್ಕೆ ಅನೇಕ ವ್ಯಾಖ್ಯಾನಗಳಿದ್ದರೂ ಈಗ ಉಪಲಬ್ಧವಾಗಿ ಮುದ್ರಿತವಾಗಿರುವುದು ಎರಡು.

೧) ಶ್ರೀಮದ್ವ್ಯಾಸರಾಜರ ಶಿಷ್ಯರಾದ ಚೆನ್ನಪಟ್ಟಣ
ಆಚಾರ್ಯಕೃತವೆಂದು ಪ್ರಸಿದ್ಧವಾದ ವ್ಯಾಖ್ಯಾನ
೨) ಪೇಜಾವರಮಠದ ಶ್ರೀವಿಶ್ವಪತಿತೀರ್ಥರ
ವ್ಯಾಖ್ಯಾನ.

ಇಂತಹ ಉತ್ತಮವಾದ ಸ್ತೋತ್ರವನ್ನು ಪಠಿಸಿ ಶ್ರೀಮದಾಚಾರ್ಯರ ಮಧ್ವಾಂತಸ್ಥನಾದ
ವಾಸುದೇವ ರೂಪಿಪರಮಾತ್ಮನ ಅನುಗ್ರಹಕ್ಕೆ ಪಾತ್ರರಾಗೋಣ.

ಶ್ರೀಕೃಷ್ಣಾರ್ಪಣಮಸ್ತು

Sri Uttaradi Math Apps

Sri Uttaradi Math

Sri Uttaradi Math

VVS Matrimony

VVS Matrimony

UM Stotra

UM Stotra

Satyatma Vani

Satyatma Vani

Sandhyavandanam

Sandhyavandanam